ಮುಂಗಾರು ಸಾಂಸ್ಕೃತಿಕ ಹಬ್ಬ: ಕ್ರಿಕೆಟ್ ಪಂದ್ಯಾವಳಿ ಮೈಸೂರು ದಸರಾ ಮಾದರಿಯಲ್ಲಿ ಕ್ರೀಡೆ, ಸಂಸ್ಕೃತಿಕ ಕಾರ್ಯಕ್ರಮ- ಪಾಪಾರೆಡ್ಡಿ

Eshanya Times

ರಾಯಚೂರು: ಜೂ-16:

ಮುಂಗಾರು ಸಾಂಸ್ಕೃತಿಕ ಹಬ್ಬನ್ನು ಮೈಸೂರು ದಸರಾ ಮಾದರಿಯಲ್ಲಿ ಆಯೋಜಿಸಿ ಅದೇ ರೀತಿ ಕ್ರೀಡೆಗಳು ಮತ್ತು ಸಾಂಸ್ಕೃತಿ ಕಾರ್ಯಕ್ರಮಗಳನ್ನು ನಡೆಸಲಾಗವುದೆಂದು ಮುಂಗಾರು ಸಾಂಸ್ಕೃತಿಕ ಹಬ್ಬ ಆಚರಣೆ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಪಾಪಾರೆಡ್ಡಿ ಹೇಳಿದರು.
ಮುಂಗಾರು ಸಾಂಸ್ಕೃತಿಕ ಹಬ್ಬದ ಅಂಗವಾಗಿ ಆಯೋಜಿಸಿದ ಕ್ರಿಕೆಟ್ ಪಂದ್ಯಾವಳಿಯ ಸಮಾರೂಪ ಸಮಾರಂಭದಲ್ಲಿ ಮಾತನಾಡಿ, ಸಮಾಜ ೪೦ ತಂಡಗಳು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು ಸಮಾಜದ ಯುವಕರು ಕ್ರೀಡೆಗಳೊಂದಿಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗದೆ. ಕೇವಲ ಕ್ರಿಕೆಟ್ ಪಂದ್ಯ ಮಾತ್ರವಲ್ಲ ಟೇಬಲ್ ಟೆನ್ನಿಜ್, ವಾಲಿಬಾಲ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಸಮಾಜದ ಯುವಕರು ನಡೆಸಿಕೊಂಡು ಬರುತ್ತಿರುವದು ಮಾದರಿಯಾಗಿದೆ ಎಂದರು.
ಜೂ.೨೨ ರಿಂದ ೨೪ರವರೆಗೆ ಮುಂಗಾರು ಸಾಂಸ್ಕೃತಿಕ ಹಬ್ಬ ಆಚರಣೆ ನಡೆಯಲಿದೆ. ೨೨ ರಂದು ನಡೆಯಲಿರುವ ಮೆರವಣಿಗೆಯಲ್ಲಿ ಇಬ್ಬರು ಜಗದ್ಗುರುಗಳು, ೪೦ ಕಲಾ ತಂಡಗಳು ಭಾಗವಹಿಸಲಿದ್ದಾವೆ. ಸರಕಾಋ ನೆರವಿಲ್ಲದೇ ಮುನ್ನೂರು ಕಾಪು ಸಮಾಜದ ಜನರ ಆರ್ಥಿಕ ನೆರವಿನಿಂದ ಮುಂಗಾರು ಹಬ್ಬ ಆಚರಿಸಲಾಗುತ್ತಿದೆ. ನಗರದ ಹಾಗೂ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಉಟ್ಕೂರು ರಾಘವೇಂದ್ರ, ನಗರಸಭೆ ಸದಸ್ಯ ಎನ್.ಶ್ರೀನಿವಾಸ ರೆಡ್ಡಿ, ಪಿ.ಶ್ರೀನಿವಾಸರೆಡ್ಡಿ, ಟಿ.ಶ್ರೀನಿವಾಸ ರೆಡ್ಡಿ, ಜಿ.ತಿಮ್ಮಾರೆಡ್ಡಿ, ಬುಲೆಟ ರಾಜಕುಮಾರ, ಯು.ನರಸರೆಡ್ಡಿ, ಜಿ.ನರಸರೆಡ್ಡಿ, ಜಿ.ಮಹೇಂದ್ರ ರೆಡ್ಡಿ, ಪೋಗಲ್ ಶ್ರೀನಿವಾಸ ರೆಡ್ಡಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";