371 (ಜೆ) ಸಮರ್ಪಕ ಅನುಷ್ಠಾನ, ಪ್ರತ್ಯೇಕ ಪ್ರಾಧಿಕಾರ ರಚನೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

Eshanya Times

ರಾಯಚೂರು: ಜೂ-15:

ಸಂವಿಧಾನ ಅನುಚ್ಛೇದ 371(ಜೆ) ಮೀಸಲಾತಿ ನಿಯಮಗಳ ಸಮಗ್ರ ಹಾಗೂ ಸಮರ್ಪಕ ಅನುಷ್ಠಾನ ಹಾಗೂ ಪ್ರತೇಕ ಪ್ರಾಧಿಕಾರ ರಚನೆಗೆ ಒತ್ತಾಯಿಸಿ ಅನುಚ್ಛೇದ 371(ಜೆ) ರಕ್ಷಣಾ ಹೋರಾಟ ಸಮಿತಿ ನೇತೃತ್ವದಲ್ಲಿ ಬೃಹತ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳು, ಸಂಘ ಸಂಸ್ಥೆಗಳು, ಹೋರಾಟಗಾರರು ಸೇರಿದಂತೆ ವಿವಿಧ ಪಕ್ಷಗಳ ಮುಖಂಡರ ನೇತೃತ್ವದಲ್ಲಿ ಬೃಹತ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ, ಹಟ್ಟಿ ಚಿನ್ನದ ಗಣಿ ಮಾಜಿ ಅಧ್ಯಕ್ಷ ಹಾಗೂ ಹೋರಾಟ ಸಮಿತಿ ಸಂಚಾಲಕ ಪಾರಸಪಾಲ ಸುಖಾಣಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಉದ್ಯೋಗ, ಶಿಕ್ಷಣ ಹಾಗೂ ಅಭಿವೃದ್ದಿಗಾಗಿ ಕಳೆದ 10 ವರ್ಷಗಳ ಹಿಂದ ಈ ಭಾಗಕ್ಕೆ 371(ಜೆ) ಜಾರಿಗೆ ತರಲಾಯಿತು. ಅಂದಿನಿAದ ಇಲ್ಲಿಯವರೆಗೆ 10 ವರ್ಷದಲ್ಲಿ ಜಾರಿ ವಿಚಾರದಲ್ಲಿ ಸಾಕಷ್ಟು ನ್ಯೂನ್ಯತೆಗಳು ಹಾಗೂ ತೊಡಕುಗಳು ಎದುರಗುತ್ತಾ ಬಂದಿದ್ದವು. ಇಂದಿಗೂ ಸಹ ಉದ್ಯೋಗ ಮತ್ತು ಶಿಕ್ಷಣದಲ್ಲಿ ಈ ಭಾಗದ ಅಭ್ಯರ್ಥಿಗಳಿಗೆ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದರು.
ಪ್ರಾದೇಶಿಕ ಅಸಮಾನತೆ ನಿವಾರಣೆಗಾಗಿ ೩೭೧(ಜೆ) ಅನುಷ್ಠಾನಕ್ಕಾಗಿ ಪ್ರತೇಕ ಸಮಿತಿ ಮಾಡಿ ಅನ್ಯಾಯವಾದಂತೆ ಸೂಕ್ತ ಅಧಿಕಾರ ನೀಡಬೇಕಾಗಿದೆ. ಉದ್ಯೋಗದಲ್ಲಿ ರಾಜ್ಯದಲ್ಲಿ ಮೆರೆಟ್ ಮತ್ತು ಮಿಕ್ಕುಳಿದ ವೃಂದದಲ್ಲಿ ಪರಿಗನಿಸಬೇಕು, ಸುತ್ತೋಲೆಯಲ್ಲಿ ಯಾವ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳು ಯಾವ ವೃಂದಕ್ಕೆ ಸೇರುತ್ತಿರಿ ಬಹು ಆಯ್ಕೆ ಕೇಳಲಾಗಿದೆ. ನಂತರ ಹೊರಡಿಸಿದ ಸುತ್ತೋಲೆಯಲ್ಲಿ ಎರಡು ಪ್ರತೇಕ ಅರ್ಜಿ ಕರೆದು ಎರಡು ಪರೀಕ್ಷೆ ನಡೆಸಲು ಸೂಚಿಸಿದೆ, ಇದು ಸಂವಿಧಾನದ ಮೀಸಲಾತಿ ವಿರುದ್ದವಾಗಿದೆ ಎಂದರು.
371(ಜೆ) ವಿಚಾರವಾಗಿ ನೇಮಕಾತಿಗೆ ಸಂಬAಧಿಸಿದAತೆ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಬೇರೆ ಬೇರೆ ನ್ಯಾಯಾಲದಲ್ಲಿ ಪ್ರಕರಣ ವ್ಯಾಜ್ಯಗಳು ದಾಖಲಾಗಿವೆ. ಇದರಿಂದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಇದಕ್ಕೆಆಗಿ ಸರಕಾರ ಆಡಳಿತಾತ್ಮಕ ನ್ಯಾಯ ಮಂಡಳಿ ರಚಿಸಿ ಕಲಬುರ್ಗಿಯಲ್ಲಿ ಮಾತ್ರ ನಿರ್ವಹಣೆ ಮಾಡುವಂತೆ ಆದೇಶಿಸಬೇಕೆಂದು ಒತ್ತಾಯಿಸಿದರು.
ಕೆಪಿಸಿಸಿ ರಾಜ್ಯ ವಕ್ತಾರ ಡಾ.ರಝಕ್ ಉಸ್ತಾದ್ ಮಾತನಾಡಿ, ಕ.ಕ.ಭಾಗಕ್ಕೆ ಸರಕಾರ ದಿಂದ ಬೋರ್ಡನ ಅಡಿಯಲ್ಲಿ ಲೀಗಲ್ ಸೇಲ್ ಸ್ಥಾಪನೆ ಮಾಡಬೇಕು, ಅಧಿಕಾರಿಗಳು ಸಮರ್ಪಕವಾಗಿ ನೇಮಕಾತಿ ಹಾಗೂ ಬಡ್ತಿಗಳನ್ನು ಕಾನೂನು ಅಡಿಯಲ್ಲಿ ತಲುಪಿಸಲು ಈ ಭಾಗದವರನ್ನೆ ಮಾಡಬೇಕು,ಸಮರ್ಪಕ ಅನುಷ್ಠಾನಕ್ಕಾಗಿ ಈಗಾಗಲೇ ಮುಖ್ಯ ಮಂತ್ರಿಗಳಿಗೆ ಈ ಭಾಗದ ಶಾಸಕರು ಮನವಿ ಸಲ್ಲಿಸಿದ್ದಾರೆ. ನಂಜುAಡಪ್ಪ ವರದಿ ಮಾದರಿಯಲ್ಲಿ ಸಮಿತಿ ಅನುಷ್ಠಾನ ಮಾಡಬೇಕು,೩೭೧(ಜೆ) ಅನುಷ್ಠಾನ ಪ್ರಾಧಿಕಾರ ರಚನೆ ಮಾಡಬೇಕು, ವ್ಯಾಜ್ಯಗಳು ನಿವಾರಣೆಗಾಗಿ ಈ ಭಾಗದಲ್ಲಿ ಕಲಬುರ್ಗಿ ಹಾಗೂ ರಾಯಚೂರಿನ ಹೊಸ ನ್ಯಾಯಾಲದಲ್ಲಿ ಪ್ರತೇಕವಾಗಿ ಮಾಡಬೇಕು, ಇದರಿಂದ ಸಾಕಷ್ಟು ತೊಂದರೆ ತಪ್ಪಲಿದೆ, ಬೇರೆ ಕಡೆ ಅಭ್ಯರ್ಥಿಗಳು ಅಲೆದಾಡುವುದು ತಪ್ಪುತ್ತದೆ ಎಂದರು.


371(ಜೆ)ನಲ್ಲಿ ಆದ ತೊಂದರೆಗಳನ್ನು ನಿವಾರಣೆಗಾಗಿ ಸಭೆಯನ್ನು ಈ ಭಾಗದ ಜನಪ್ರತಿನಿಧಿಗಳನೊಳಗೊಂಡ ಸಭೆ ಕರೆಯಬೇಕೆಂದು ಒತ್ತಾಯಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ ಸದಸ್ಯ ಎ.ವಸಂತ ಕುಮಾರ ಮಾತನಾಡಿ, 371(ಜೆ) ಜಾರಿಯಾಗಿ 10ವರ್ಷಗಳಾಗಿವೆ. ಈ ಅವಧಿಯಲ್ಲಿ ಸಾಕಷ್ಟು ತೊಡಕುಗಳು ಕಂಡಿದ್ದೇವೆ.10ವರ್ಷಗಳಲ್ಲಿ ಬೇರೆ ಬೇರೆ ವಿವಿಗಳಲ್ಲಿ ಅಭ್ಯರ್ಥಿಗಳ ನೇಮಕಾತಿ ವಿಷಯದಲ್ಲಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ತರಲಾಗಿದೆ. ಮೆಡಿಕಲ್ ಸೀಟ್ ಸೇರಿದಂತೆ ಎಲ್ಲಾ ವಿಭಾಗದಲ್ಲಿ ತಡೆಯಾಜ್ಞೆಯಿಮದ ತೊಂದರೆಯಾಗಿದೆ. ಇದರಿಂದ ಶೇ ೮ ಮೀಸಲಾತಿಯಿಂದ ವಂಚಿತರಾಗಿದ್ದೇವೆ ಎಂದರು.
ಪ್ರತಿಭಟನೆಯಲ್ಲಿ ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಶಾಸಕ ಸಂಸದ ಕೆ.ವಿರೂಪಕ್ಷಾಪ್ಪ, ಮಾಜಿ ಶಾಸಕ ಎ.ಪಾಪಾರೆಡ್ಡಿ, ಎನ್.ಶಂಕ್ರಪ್ಪ,ನಗರಸಭೆ ಸದಸ್ಯ ಜಯಣ್ಣ, ಮಾಜಿ ಸದಸ್ಯ ಕೆ.ಶಾಂತಪ್ಪ, ಎಂ.ಪವನ್ ಕುಮಾರ ಈರಣ್ಣ,ಶ್ರೀಕಾಂತ ವಕೀಲ್, ಜೆಡಿಎಸ್ ಅಧ್ಯಕ್ಷ ಎಂ.ವಿರುಪಾಕ್ಷಿ, ಟಾಗೋರ ಸಂಸ್ಥೆ ಅಧ್ಯಕ್ಷ ಅಮರೇಶ ಪಾಟೀಲ್, ಬಿಜೆಪಿ ಮುಖಂಡ ರವೀಂದ್ರ ಜಲ್ದಾರ್, ಕಾಂಗ್ರೆಸ್ ನಾಯಕಿ ಶ್ರೀದೇವಿ ನಾಯಕ,ನಾಗರಾಜ ಮಸ್ಕಿ ವಕೀಲ್, ಬಸವರಾಜ್ ಕಳಸ, ಅಶೋಕ ಜೈನ್, ಜಗದೀಶ ಗುಪ್ತ,ರುದ್ರಪ್ಪ ಅಂಗಡಿ,ಅAಬಾಪತಿ ಪಾಟೀಲ್ ವಕೀಲ್, ಜಿ.ಶಿವಮೂರ್ತಿ, ದೇವಣ್ಣ ನಾಯಕ ವಕೀಲ್, ಅಬ್ದುಲ್ ಕರೀಮ್,ಕೆ.ಜಿ.ವೀರೇಶ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";