ಮುಂಗಾರು ಸಾಂಸ್ಕೃತಿಕ, ರಾಯಚೂರು ಹಬ್ಬಕ್ಕೆ ಚಾಲನೆ ಮುಂಗಾರು ಸಾಂಸ್ಕೃತಿ, ರಾಯಚೂರು ಹಬ್ಬ ಅತ್ಯಂತ ಆದ್ದೂರಿ ಆಚರಣೆ ಶ್ಲಾಘನೀಯ- ಸಚಿವ ಡಾ.ಶರಣಪ್ರಕಾಶ ಪಾಟೀಲ್

Eshanya Times

ರಾಯಚೂರು: ಜೂ-21:

ಮುನ್ನೂರು ಕಾಪು ಸಾಮಾಜ ದಿಂದ ಸುಮಾರು ೨೪ ವರ್ಷಗಳಿಂದ ಮುಂಗಾರು ಸಾಂಸ್ಕೃತಿಕ ಹಬ್ಬ, ರಾಯಚೂರು ಹಬ್ಬವನ್ನು ಮಾಜಿ ಶಾಸಕ ಎ.ಪಾಪಾರೆಡ್ಡಿ ಮತ್ತು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡಡ್ಡಿ ಅವರ ನೇತೃತ್ವದಲ್ಲಿ  ಆದ್ದೂರಿಯಾಗಿ ಆಚರಣೆ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ ಕಾರ್ಯವೆಂದು ರಾಜ್ಯ ವೈದ್ಯಕೀಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.

ನಗರದ ರಾಜೇಂದ್ರ ಗಂಜ್ ಅವರಣದಲ್ಲಿ ಮುನ್ನೂರು ಕಾಪು ಸಮಾಜದ ವತಿಯಿಂದ ಆಯೋಜಿಸಿದ ಮುಂಗಾರು ಸಾಂಸ್ಕೃತಿ ಹಬ್ಬ, ರಾಯಚೂರು ಹಬ್ಬದ ಅಂಗವಾಗಿ ಮೊದಲ ದಿನದ ಒಂದುವರೆ ಟನ್ ಭಾರತ ಕಲ್ಲನ್ನು ಎತ್ತುಗಳು ಎಳೆಯವ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡುತ್ತ, ಈ ಆಚರಣೆ ಮತ್ತು ಎತ್ತುಗಳು ಭಾರದ ಕಲ್ಲು ಎಳೆಯುವ ಸ್ಪರ್ಧೆಗಳು ಮತ್ತು ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ರಾಜ್ಯದ ಗಮನ ಸೆಳೆದಿವೆ. ದೇಶ ಮತ್ತು ರಾಜ್ಯ ಕೃಷಿ ಪ್ರಧಾನವಾಗಿದ್ದು, ಈ ಹಬ್ಬದ ಆಚರಣೆ ಮೂಲಕ ಕೃಷಿ,ರೈತರು ಮತ್ತು ಅವರ ಎತ್ತುಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಇದರಿಂದ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಲು  ಇನ್ನಷ್ಟೂ ಹುರುಪು ಬರುತ್ತದೆ ಎಂದರು.

ಶಾಸಕ ಡಾ.ಶಿವರಾಜ್ ಪಾಟೀಲ್ ಮಾತನಾಡಿ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬವನ್ನು ಸರಕಾರ ವತಿಯಿಂದ ಆಚರಣೆಗೆ ಎಲ್ಲರೂ ಸರಕಾರದ ಮೇಲೆ ಒತ್ತಾಡ ಹಾಕಬೇಕೆಂದು ಮನವಿ ಮಾಡಿದರು. ೨೪ ವರ್ಷಗಳಿಂದ ಮುನ್ನೂರು ಕಾಪು ಸಮಾಜದ ಯಾರೇ ಆರ್ಥಿಕ ಸಹಾಯವಿಲ್ಲದೇ ಆಚರಣೆ ಮಾಡಿಕೊಂಡು ಬಂದಿದೆ. ಮುಂದಿ ವರ್ಷ ೨೫ ವರ್ಷದ ಆಚರಣೆಗೆ ಸರಕಾರ ಆರ್ಥಿಕ ನೆರವು ನೀಡಬೇಕೆಂದು ಒತ್ತಾಯಿಸಿದರು. ಈ ಹಬ್ಬ ರೂವಾರಿ ಮಾಜಿ ಶಾಸಕ ಎ.ಪಾಪಾರೆಡ್ಡಿ ಅವರಿಗೆ ಸರಕಾರದ ವತಿಯಿಂದ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸುವಂತೆ ಸರಕಾರಕ್ಕೆ ಮನವಿ ಮಾಡಿದರು.

ರಾಯಚೂರು ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಮಾತನಾಡಿ, ಸುಮಾರು ೨೪ ವರ್ಷಗಳಿಂದ ಮಾಜಿ ಶಾಸಕರಾದ ಎ.ಪಾಪಾ ರೆಡ್ಡಿ ಅವರ ನೇತೃತ್ವದಲ್ಲಿ ಮುನ್ನೂರು ಕಾಪು ಸಮಾಜದ ವತಿಯಿಂದ ಮುಂಗಾರು ಸಾಂಸ್ಕೃತಿ ಹಬ್ಬ ರಾಯಚೂರು ಹಬ್ಬ ಆದ್ದೂರಿಯಾಗಿ ಆಚರಣೆ ಮಾಡುತ್ತ ಬಂದಿದ್ದಾರೆ. ಮುಂದಿನ ೨೫ ವರ್ಷದ ಮುಂಗಾರು ಸಾಂಸ್ಕೃತಿ ಹಬ್ಬ, ರಾಯಚೂರು ಹಬ್ಬವನ್ನು ಸರಕಾರ ದಿಂದ ಆಚರಣೆಗೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದರು.

ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ವಿಧಾನ ಪರಿಷತ ಸದಸ್ಯ ಎ.ವಸಂತಕುಮಾರ, ಮಾಜಿ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಬಯ್ಯಾಪುರ ಮಾತನಾಡಿದರು.

ಬಿಚ್ಚಲಿ ವೀರತಪಸ್ವಿ ವೀರಭಧ್ರ ಶಿವಾಚಾರ್ಯ ಮಹಾಸ್ವಾಮಿಗಳು ಆರ್ಶಿವಚನ ನೀಡಿದರು. ಸೋಮವಾರಪೇಟೆಯ ಹಿರೇಮಠ ಅಭಿನವ ರಾಚೋಟಿ ವೀರ ಶಿವಾಚಾರ್ಯ ಮಹಾಸ್ವಾಮಿಗಳು, ಶಂಭು  ಸೋಮನಾಥ ಶಿವಚಾರ್ಯ ಮಹಾಸ್ವಾಮಿಗಳು, ಸುಲ್ತಾನಪು ಬೃಹ್ಮಠ ಪಂಪಾತಿ ದೇವರು, ಕಡಗಂಚಿ ಆಗಮಿಸಿದ್ದರು.

ಅಧ್ಯಕ್ಷತೆಯನ್ನು ಹಬ್ಬದ ರೂವಾರಿ ಮಾಜಿ ಶಾಸಕ ಎ.ಪಾಪಾರೆಡ್ಡಿ ವಹಿಸಿದರು.ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ವಿ.ಕೃಷ್ಣಮೂರ್ತಿ, ಚಂದ್ರಶೇಖರ ರೆಡ್ಡಿ, ವೆಂಕಟರೆಡ್ಡಿ,ಕಾAಗ್ರೆಸ್ ಮುಖಂಡರಾದ ಕೆ.ಶಾಂತಪ್ಪ, ಜಿ,ಶಿವಮೂರ್ತಿ, ಬಿಜೆಪಿ ಮುಖಂಡ ಕಡಗೋ ಆಂಜನೇಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";