ಜೂ.೨೧ ರಿಂದ ೨೩ರವರೆಗೆ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಎತ್ತುಗಳು ಕಲ್ಲು ಎಳೆಯುವ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು-ಪಾಪಾರೆಡ್ಡಿ

Eshanya Times

ರಾಯಚೂರು: ಜೂ-18:
ಇದೇ ತಿಂಗಳ ೨೧ ರಿಂದ ೨೩ರವರೆಗೆ ಮುನ್ನೂರು ಕಾಪು ಸಮಾಜದ ವತಿಯಿಂದ ಕಾರುಹುಣ್ಣಿಮೆ ಹಬ್ಬದ ಅಂಗವಾಗಿ ಎತ್ತುಗಳಿಂದ ಭಾರದ ಕಲ್ಲು ಎಳೆಯುವ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ ಎಂದು ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಪಾಪಾರೆಡ್ಡಿ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೂ.೨೧ ರಂದು ಮೊದಲ ದಿನ ಒಂದುವರೆ ಟನ್ ಭಾರ ಕಲ್ಲು ಎತ್ತುಗಳು ಎಳೆಯುವ ಸ್ಪರ್ಧೆ ನಡೆಯಲಿದ್ದು, ರಾಜ್ಯದ ಎತ್ತುಗಳಿಗೆ ಮಾತ್ರ ಪ್ರವೇಶವಿದೆ. ವಿಜೇತ ಮೊದಲ ಎತ್ತುಗಳಿಗೆ ಪ್ರಥಮ ಬಹುಮಾರ ೬೫ ಸಾ.ರೂ. ದ್ವಿತೀಯ ಬಹುಮಾನವಾಗಿ ೫೫ ಸಾ.ರೂ.ತೃತೀಯ ಬಹುಮಾನ ೪೫ ಸಾ.ರೂ. ನಾಲ್ಕನೇ ಬಹುಮಾನ ೩೫ ಸಾ.ರೂ.ಐದನೇ ಬಹುಮಾನ ೩೦ ಸಾ.ರೂ. ಆರನೇ ಬಹುಮಾನ ೧೫ ಸಾ.ರೂ. ಏಳನೇ ಬಹುಮಾನ ೧೦ ಸಾ.ರೂ.ನಗದು ಮತ್ತು ಟ್ರೋಫಿ ನೀಡಲಾಗುತ್ತದೆ ಎಂದರು.
ಉದ್ಘಾಟನೆÀಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಾಡಲಿದ್ದಾರೆ. ಸಾನಿಧ್ಯವನ್ನು ಮಟಮಾರಿ ಶ್ರೀ ವೀರಭಧ್ರ ಶಿವಾಚಾರ್ಯರು, ಸಓಮವಾರಪೇಟೆ ಮಠದ ಶ್ರೀ ಅಭಿನವ ರಾಚೋಟಿ ವೀರ ಶಿವಾಚಾರ್ಯರು, ಸುಲ್ತಾನಪುರ ಮಠದ ಶ್ರೀ ಶಂಭು ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಜೀ ವಹಿಸಲಿದ್ದಾರೆಂದರು.
ದಿ.೨೧ ರಂದು ಸಂಜೆ ಗದ್ವಾಲ್ ರಸ್ತೆಯ ಶ್ರೀವೀರಾಂಜನೇಯ ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಕರ್ನಾಟಕ, ಮಹಾರಾಷ್ಟç, ರಾಜಸ್ಥಾನ,ಗುಜರಾತ, ಬಾಂಬೆಗಳಿAದ ಕಲಾತಂಡಗಳು ಭಾಗವಹಿಸಲಿವೆ.
ಜೂ.೨೨ ರಂದು ಎರಡು ಟನ್ ಭಾರ ಕಲ್ಲು ಎತ್ತುಗಳು ಎಳೆಯುವ ಸ್ಪರ್ಧೆ ನಡೆಯಲಿದ್ದು, ವಿಜೇತ ಮೊದಲ ಎತ್ತುಗಳಿಗೆ ಪ್ರಥಮ ಬಹುಮಾನ ೮೦ ಸಾ.ರೂ. ದ್ವಿತೀಯ ಬಹುಮಾನವಾಗಿ ೬೫ ಸಾ.ರೂ.ತೃತೀಯ ಬಹುಮಾನ ೫೫ ಸಾ.ರೂ. ನಾಲ್ಕನೇ ಬಹುಮಾನ ೪೫ ಸಾ.ರೂ.ಐದನೇ ಬಹುಮಾನ ೪೦ ಸಾ.ರೂ. ಆರನೇ ಬಹುಮಾನ ೩೦ ಸಾ.ರೂ. ಏಳನೇ ಬಹುಮಾನ ೨೦ ಸಾ.ರೂ.ನಗದು ನೀಡಲಾಗುತ್ತದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ್ ನೆರವೇರಿಸಲಿದ್ದಾರೆ. ಹರಿಪುರದ ಶ್ರೀ ಶಂಕರಾಚಾರ್ಯ ಸವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ, ಗಬ್ಬೂರು ಶ್ರೀ ಬೂದಿಬಸವೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.
ಜೂ.೨೩ ರಂದು ಎರಡುವರೆ ಟನ್ ಭಾರದ ಕಲ್ಲುಗಳನ್ನು ಎತ್ತುಗಳು ಎಳೆಯುವ ಸ್ಪರ್ಧೆ ನಡೆಯಲಿದ್ದು, ವಿಜೇತ ಮೊದಲ ಎತ್ತುಗಳಿಗೆ ಪ್ರಥಮ ಬಹುಮಾನ ೯೦ ಸಾ.ರೂ. ದ್ವಿತೀಯ ಬಹುಮಾನವಾಗಿ ೭೫ ಸಾ.ರೂ.ತೃತೀಯ ಬಹುಮಾನ ೬೫ ಸಾ.ರೂ. ನಾಲ್ಕನೇ ಬಹುಮಾನ ೫೫ ಸಾ.ರೂ.ಐದನೇ ಬಹುಮಾನ ೪೫ ಸಾ.ರೂ. ಆರನೇ ಬಹುಮಾನ ೩೫ ಸಾ.ರೂ. ಏಳನೇ ಬಹುಮಾನ ೨೦ ಸಾ.ರೂ.ನಗದು ನೀಡಲಾಗುತ್ತದೆ ಎಂದರು. ಈ ವರ್ಷ ಏಳನೇ ಬಹುಮಾನ ನೀಡಲು ನಿರ್ಧಾರಿಸಲಾಗಿದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ನೆರವೇರಿಸಲಿದ್ದಾರೆಂದರು.
ಜೂ.೨೨ ರಂದು ಕಾರಹುಣ್ಣಿಮೆ ಅಂಗವಾಗಿ ಶ್ರೀ ಮಾತಾ ಲಕ್ಷö್ಮಮ್ಮ ದೇವಿ ಮೆರವಣಿಗೆ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ನೆರೆ ಆಂದ್ರ ಪ್ರದೇಶ, ತೆಲಂಗಾಣ,ಕೇರಳ, ತಮಿಳು ನಾಡಿನಿಂದಲೂ ೪೦ ಕಲಾತಂಡಗಳು ಭಾಗವಹಿಸಲಿವೆ. ಮೂರು ತಮಿಳುನಾಡು, ಮೂರು ಕೇರಳ,ಎರಡು ಆಂದ್ರಪ್ರದೇಶದ ಕಲಾ ತಂಡಗಳೊAದಿಗೆ ರಾಜ್ಯದ ವಿವಿಧ ಜಿಲ್ಲೆಗಳ ಕಲಾತಂಡಗಳು ಭಾಗವಹಿಸಲಿವೆ. ೧೨ವರೆ ಲಕ್ಷ ರೂ. ಹಣವನ್ನು ಕಲಾತಂಡಗಳಿಗೆ ಮುನ್ನೂರು ಕಾಪು ಸಮಾಜ ವೆಚ್ಚ ಮಾಡಲಿದೆ. ಎತ್ತುಗಳೊಂದಿಗೆ ನಡೆಯಲಿರುವ ಮೆರವಣಿಗೆ ನಗರದ ವಿವಿಧ ರಸ್ತಗಳಲ್ಲಿ ನಡೆಸಲಾಗುತ್ತದೆ ಎಂದರು.
ಜೂ.೨೨ ರಂದು ಸಂಜೆ ೬ ಗಂಟೆಗೆ ನಗರದ ನಿಜಲಿಂಗಪ್ಪ ಕಾಲೋನಿ ಶ್ರೀಗಣೇಶ ಗುಡಿ ದೇವಸ್ಥಾನದ ಬಳಿ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳುತ್ತವೆ. ದಿ.೨೩ ರಂದು ಸಂಜೆ ೬ ಗಂಟೆಗೆ ಗಂಜ ಕಲ್ಯಾಣ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳುತ್ತವೆ. ದಿ.೨೩ ರಂದು ಸಂಜೆ ೫ ಗಂಟೆಗೆ ರಾಜೇಂದ್ರ ಗಂಜನಲ್ಲಿ ಕುಸ್ತಿ ಪಂದ್ಯ ನಡೆಯಲಿದೆ. ಕರ್ನಾಟಕ, ಮಹಾರಾಷ್ಟç, ಪಂಜಾಬ್,ಆAದ್ರ, ದೆಹಲಿಗಳಿಂದ ಕುಸ್ತಿ ಪಟುಗಳು ಭಾಗವಹಿಸಲಿದ್ದಾರೆಂದರು. ಅಂದು ಮಧ್ಯಾಹ್ನ ಶ್ರೀ ಲಕ್ಷö್ಮಮ್ಮ ದೇವಸ್ಥಾನದ ಬಳಿ ಕಲ್ಲುಗುಂಡು, ಉಸುಕಿನ ಚೀಲ ಎತ್ತುವ ಸ್ಪರ್ಧೆಗಳು ನಡೆಯಲಿವೆ. ಮೂರು ದಿನ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲೆಯ ಜನರು ಭಾಗವಹಿಸುವಂತೆ ಮನವಿ ಮಾಡಿದರು.
ಎಪಿಎಂಸಿಯವರು ೫ ಲಕ್ಷ ರೂ.ಆರ್ಥಿಕ ನೆರವು ನೀಡುವ ಭರವಸೆ ನೀಡಿದ್ದಾರೆ. ಸರಕಾರ ದಿಂದ ಯಾವುದೇ ನೆರವು ಕೋರಿಲ್ಲವೆಂದರು. ಜಿಲ್ಲೆಯ ಜನರು ಮೈಸೂರು ದಸರಾ ಮಾದರಿಯಲ್ಲಿ ನಡೆಯುವ ಸಾಂಸ್ಕೃತಿಕ ಹಬ್ಬ ವೀಕ್ಷಿಸಲು ಮುನ್ನೂರು ಕಾಪು ಸಮಾಜ ಆಚರಿಸಿಕೊಂಡು ಬರುತ್ತಿದೆ. ೨೫ ವರ್ಷ ಹಬ್ಬವನ್ನು ಇನ್ನೂ ವಿಜೃಂಣೆಯಿAದ ಆಚರಿಸಲು ಯೋಚಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜಿ.ಬಸವರಾಜ್ ರೆಡ್ಡಿ,ಭಂಗಿ ನರಸರೆಡ್ಡಿ, ಪೋಗಲ್ ಚಂದ್ರಶೇಖರರೆಡ್ಡಿ,, ಕ್ರೀಡಾ ಸಮಿತಿ ಅಧ್ಯಕ್ಷ ಎನ್.ಶ್ರೀನಿವಾಸ ರೆಡ್ಡಿ, ಎನ್.ಶೇಖರರೆಡ್ಡಿ,ರಾಜೇಂದ್ರ ರೆಡ್ಡಿ, ಗುಡ್ಸಿ ನರಸರೆಡ್ಡಿ, ಪ್ರತಾಪರೆಡ್ಡಿ,ಪುಂಡ್ಲ ರಾಜೇಂದ್ರ ರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";