ಅಖಿಲ ಭಾರತ ಕಾರ್ಮಿಕ ಬೇಡಿಕೆ ದಿನದ ಅಂಗವಾಗಿ ಭಾರತ ರಾಷ್ಟ್ರಪತಿಗೆ ಟಿಯುಸಿಐ ಪತ್ರ

Eshanya Times

ರಾಯಚೂರು: ದೇಶಾದ್ಯಂತ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ (ಟಿಯು ಸಿಐ )ಅಖಿಲ ಭಾರತ ಕಾರ್ಮಿಕ ಬೇಡಿಕೆ ದಿನದ ಪ್ರತಿಭಟನೆಯ ಮೂಲಕ ರಾಷ್ಟ್ರಪತಿಗಳಿಗೆ ಮನವಿಯೊಂದನ್ನು ತಹಶೀಲ್ದಾರರ ಮೂಲಕ ಸೋಮವಾರ ಅರ್ಪಿಸಿತು.

4 ಲೇಬರ್ ಕೋಡ್‌ಗಳನ್ನು ರದ್ದುಗೊಳಿಸಿ,  ಕನಿಷ್ಠ ವೇತನವನ್ನು ಜಾರಿಗೆ ತನ್ನಿ ಮತ್ತು ಎಲ್ಲಾ ಕಾರ್ಮಿಕರಿಗೆ ತಿಂಗಳಿಗೆ ₹31500 ವೇತನ ಹೆಚ್ಚಿಸಿ. ಎಲ್ಲರಿಗೂ 8-ಗಂಟೆಗಳ ಕೆಲಸ, ರಜಾದಿನಗಳು ಮತ್ತು ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಖಚಿತಪಡಿಸಿಕೊಳ್ಳಿ. ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ರದ್ದುಪಡಿಸಿ ಮತ್ತು ಎಲ್ಲಾ ಕ್ಷೇತ್ರಗಳಿಗೆ ಸಮಾನ ವೇತನವನ್ನು ಖಚಿತಪಡಿಸಿ. ವಲಸೆ ಕಾರ್ಮಿಕರಿಗೆ ಕಾನೂನು ರಕ್ಷಣೆಯನ್ನು ಒದಗಿಸಿ ಹಿಂದೂ ರಾಷ್ಟ್ರ ಅಗತ್ಯವಿಲ್ಲ; ನಾವು ಭಾರತದ ನಿರ್ಮಾತೃಗಳು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ನಗರದ ಅಂಬೇಡ್ಕರ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ  ಜಿ. ಅಮರೇಶ್ ತುಂಗಭದ್ರಾ ಹಂಗಾಮಿ ಕಾರ್ಮಿಕ ಮುಖಂಡ ಜಿ. ಅಡವಿರಾವ್, ಆಂಜಿನೇಯ, ಸತ್ಯಪ್ಪ, ಶಫಿ ಮತ್ತು ನಗರದ ಬೀದಿಬದಿ ವ್ಯಾಪಾರಿಗಳ ಸಂಘದ ಶೇಕ್ ಹುಸೇನ್ ಭಾಷಾ, ರಾಮು, ರಾಜು, ಕರೀಮುಲ್ಲಾ, ಪ್ರಕಾಶ ಇನ್ನಿತರರು ಭಾಗವಹಿಸಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";