ಇಂದು ಜಿಲ್ಲೆಗೆ ಸಿಎಂ, ಡಿಸಿಎಂ ಆಗಮನ, ವಿವಿಧ‌ ಕಾಮಗಾರಿಗಳ‌ ಶಂಕುಸ್ಥಾಪನೆ- ಬೋಸರಾಜು.

Eshanya Times

ರಾಯಚೂರು:
ಕೃಷಿ ಚಟುವಟಿಕೆ ‌ಹಾಗೂ 24*7 ಕುಡಿಯುವ ನೀರಿಗಾಗಿ ಕೃಷ್ಣಾ ನದಿಯಿಂದ ಗಣೆಕಲ್ (ಬಂಗಾರಪ್ಪ) ಕೆರೆಗೆ ನೀರುಣಿಸುವ ಅಪ್ರಾಳ ಏತ ನೀರಾವರಿ ಯೋಜೆನೆ ಕಾಮಗಾರಿ ಉದ್ಘಾಟನೆ ಸೇರಿ ವಿವಿಧ ಅಭಿವೃದ್ಧಿಯ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಗ್ಯಾರಂಟಿ ಯೋಜನೆಗಳ‌ ಫಲಾನುಭವಿಗಳ ಸಮಾವೇಶಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ‌ ಉಪ ಮುಖ್ಯಮಂತ್ರಿ‌ ಡಿಕೆ ಶಿವಕುಮಾರ್ ಅವರು‌ ದಿ. 14 ರಂದು ಗುರುವಾರ ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಸಣ್ಣ ನೀರಾವರಿ ಹಾಗೂ‌ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ಎಸ್ ಬೋಸರಾಜು ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ‌ ಸರ್ಕಾರ ನೀಡಿದ ಗ್ರಾರಂಟಿಗಳಾದ ಗೃಹ‌ಲಕ್ಷ್ಮೀ, ಉಚಿತ ಪ್ರಯಾಣ
ಗೃಹ ಜ್ಯೋತಿ, ಅನ್ನಬಾಗ್ಯ, ಯುವನಿಧಿ ಯ ಯೋನೆಗಳ ಹಾಗೂ ಕಾಂಗ್ರೆಸ್ ಸರಕಾರ ನೀಡಿದ ಜನಪರ‌ ಯೋಜನೆಗಳ ಫಲಾನುಭವಿಗಳೊಂದಿಗೆ ಸಿಎಂ ಸಿದ್ಧರಾಮಯ್ಯ, ಡಿಸಿಎಂ‌ ಡಿಕೆ ಶಿವಕುಮಾರ್ ಅವರು‌ ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಬಂದಪಟ್ಟ ಸಚಿವರುಗಳು, ಶಾಸಕರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಗ್ಯಾರಂಟಿ ಯೋಜನೆಯ ಫಲಾನುಭವಿಗಳು, ಪಕ್ಷದ ಕಾರ್ಯಕರ್ತರು ಸೇರಿದಂತೆ ಎಲ್ಲರು ಆಗಮಿಸಿ ಕಾರ್ಯಕ್ರಮ‌ ಯಶಸ್ವಿಗೊಳಿಸಲು ಕೋರಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";