ನಗರದ ತಗ್ಗು ಪ್ರದೇಶದ ಮನೆಗಳಿಗೆ ನೀರು, ಚರಂಡಿಗಳ ಹೂಳೆತ್ತಲು ಕರವೇ ಮನವಿ.

Eshanya Times

ಸಿಂಧನೂರು.ಅ.21 : ಹೊಟ್ಟೆ ಪಾಡಿಗಾಗಿ ದುಡಿದು ಕುಟುಂಬವನ್ನು ಸಾಗಿಸುವ ಬಡ ಬೀದಿ ಬದಿ ವ್ಯಾಪಾರಿಗಲನ್ನು ಇಕ್ಕಲೆಬ್ಬಿಸಬೇಡಿರಿ. ಹಾಗೂ ನಗರದಲ್ಲಿರುವ 31 ವಾರ್ಡ್ ಗಳಲ್ಲಿಯೂ ಕೂಡ ಬಹಳಷ್ಟು ಚರಂಡಿಗಳಲ್ಲಿ ಹೂಳು, ಕಸ, ತ್ಯಾಜ್ಯ ಹಾಗೂ ಮುಳ್ಳುಕಂಟಿಗಳಿ0ದ ತುಂಬಿ ಕೊಂಡಿವೆ. ಕೂಡಲೇ ಚರಂಡಿಯ ಹೂಳೆತ್ತಿ, ತ್ಯಾಜ್ಯ ವಿಲೇವಾರಿ ಮಾಡುವ ಮೂಲಕ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗದಂತೆ ಕ್ರಮ ಕೈಗೊಳ್ಳಬೇಕು ಹಾಗೂ ಬೀದಿ ಬದಿಯ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸದಂತೆ ಆಗ್ರಹಿಸಿ ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಗರದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಚರಂಡಿ ನೀರು ವಿವಿಧ ವಾರ್ಡ್ ಗಳ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿ ನಿವಾಸಿಗಳು ವಾಸ ಮಾಡಲು ಅಷ್ಟೇ ಅಲ್ಲದೇ ನಾನಾ ಅನಾರೋಗ್ಯ ಸಮಸ್ಯೆ ಎದುರಿಸಿದ್ದಾರೆ. ಕೆಲವು ಏರಿಯಾದ ಚರಂಡಿಗಳಲ್ಲಿ ನೀರು ಸರಾಗ ಹರಿಯದೇ ರಸ್ತೆ, ಮನೆಗಳಿಗೆ ನುಗ್ಗುತ್ತಿದೆ. ಹೀಗಾಗಿ ರಸ್ತೆಗಳು ರಾಡಿಮಯವಾಗುತ್ತಿವೆ. ಅಲ್ಲದೇ ನಗರದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿರುವ ಬಸ್ ಶೆಲ್ಟರ್ ಆಜುಬಾಜು ಗಲೀಜು ವಾತಾವರಣ ನಿರ್ಮಾಣವಾಗಿ ಪ್ರಯಾಣಿಕರು ಕುಳಿತುಕೊಳ್ಳಲು ಮುಜುಗರ ಪಡುತ್ತಿದ್ದಾರೆ. ಕೂಡಲೇ ಕ್ರಮಕ್ಕೆ ಮುಂದಾಗಬೇಕು.
ನಗರಸಭೆ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. ಬೀದಿ ಬದಿ ವ್ಯಾಪಾರಸ್ಥರ ಮೇಲೆ ದಿಢೀರ್ ಕ್ರಮ ಕೈಗೊಳ್ಳುವುದರಿಂದ ಅವರ ಕುಟುಂಬಗಳು ಸಮಸ್ಯೆಗೀಡಲಾಗಿವೆ. ಬೀದಿ ವ್ಯಾಪಾರಸ್ಥರು ದೈನಂದಿನ ದುಡಿಮೆಯನ್ನು ಅವಲಂಬಿಸಿದ್ದು, ನಾನಾ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದಾರೆ. ಏಕಾಏಕಿ ಅವರ ಮೇಲೆ ಕ್ರಮ ಕೈಗೊಳ್ಳುವುದರಿಂದ ಸಾಲ ಮರುಪಾವತಿಗೆ ಸಮಸ್ಯೆಯಾಗುತ್ತದೆ. ಹಾಗಾಗಿ ಈ ನಿರ್ಧಾರವನ್ನು ನಗರಸಭೆ ಕೈಬಿಡಬೇಕು ಹಾಗೂ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಸುರೇಶ ಗೊಬ್ಬರಕಲ್, ಉಪಾಧ್ಯಕ್ಷ ಹನುಮೇಶ ತಿಪ್ಪನಹಟ್ಟಿ, ನಗರ ಘಟಕದ ಅಧ್ಯಕ್ಷ ದಾವಲ್‌ಸಾಬ್ ದೊಡ್ಡಮನಿ, ಸಂಘಟನೆ ಪ್ರಮುಖರಾದ ಶ್ರೀಕಾಂತರೆಡ್ಡಿ, ಮಹಿಬೂಬಸಾಬ್, ವಿಘ್ನೇಶ, ರಾಘವೇಂದ್ರ ಹನುಮೇಶ ಗೀತಾಕ್ಯಾಂಪ್, ರವಿಕುಮಾರ್, ಸೇರಿದಂತೆ ಅನೇಕರಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";