ವಿದ್ಯುತ್ ಕಂಬ ದುರಸ್ಥಿಗೆ ನಮ್ಮ ಕರ್ನಾಟಕ ಸೇನೆ ಆಗ್ರ

Eshanya Times

ಯಾದಗಿರಿ :ತಾಲ್ಲೂಕಿನ ಹೆಡಗಿಮದ್ರಾ ಗ್ರಾಮದಲ್ಲಿ ವಿದ್ಯುತ್ ಸರಬರಾಜು ಕೊರೆತೆ ಮತ್ತು ಕಂಬಗಳು ದುರಸ್ತಿಗೋಳಿಸಬೇಕೆಂದು ನಮ್ಮ ಕರ್ನಾಟಕ ಸೇನೆ ಯಾದಗಿರಿ ತಾಲ್ಲೂಕ ಘಟಕ ಅಧ್ಯಕ್ಷ ಬಾಬು ಹೆಡಗಿಮದ್ರಾ ಕಾರ್ಯನಿರ್ವಾಹ ಅಭಿಯಂತರರು ವಿದ್ಯುತ್ ಸರಭರಾಜು ಯಾದಗಿರಿ ಇವರಿಗೆ ಮನವಿ ಪತ್ರದ ಮೂಲಕ ಆಗ್ರಹಿಸಿದ್ದಾರೆ.

ಹೆಡಗಿಮದ್ರಾ ಗ್ರಾಮದಲ್ಲಿ ಸುಮಾರು ೩-೪ ದಿನಗಳಿಂದ ವಿದ್ಯುತ್ ಕೊರತೆಯಿಂದ ಗ್ರಾಮಸ್ಥರು ಪರದಾಡುತತಿದ್ದಾರೆ ಕೂಡಲೇ ಈ ಕೊರತೆಯನ್ನು ನೀಗಿಸಬೇಕು ಮತ್ತು ಗ್ರಾಮದಲ್ಲಿ ಅನೇಕ ಕಡೆ ವಿದ್ಯುತ್ ಕಂಬಗಳು ಬಾಗಿ ಕೆಳಗೆ ಬೀಳುವ ಪರಸ್ಥಿಯಲ್ಲಿದ್ದು ಹಾಗೂ ವಿದ್ಯುತ್ ತಂತಿ ಜನರ ಕೈಗೆ ತಾಗುವಂತಿದೆ ಇದರಿಂದ ಸಾರ್ವಜನಿಕರಿಗೆ ಜೀವದ ಭಯವಾಗಿದೆ ಈ ಕಾರಣದಿಂದ ಕೂಡಲೇ ಈ ತೊಂದರೆಯನ್ನು ಬಗೆಹರಿಸಬೇಕು ಇಲ್ಲವಾದಲ್ಲಿ ಮುಂದಾಗುವ ಅನಾಹುತಗಳಿಗೆ ತಾವೇ ಜವಾಬ್ದಾರಿಯಾಗುತ್ತಿರೆಂದು ತಿಳಿಸುತ್ತ ಮತ್ತು ಇನ್ನು ಒಂದು ವಾರದಲ್ಲಿ ಈ ವಿದ್ಯುತ್ ಕಂಬಗಳ ದುರಸ್ಥಿಯಾಗದಿದ್ದಲ್ಲಿ ನಮ್ಮ ಸಂಘಟನೆಯಿAದ ತಮ್ಮ ಕಚೇರಿ ಮುಂದೆ ಉಗ್ರವಾದ ಹೋರಾಟವನ್ನು ಮಾಡತ್ತೇವೆಂದು ಮನವಿ ಪತ್ರದ ಮೂಲಕ ಎಚ್ಚರಿಸಿದ್ದಾರೆ.
ಈ ಸಂದ0ರ್ಭದಲ್ಲಿ ಜನಾರ್ಧನ (ಜೆಕೆ) ಅಮ್ಮಣ್ಣ ವಿಶ್ವಕರ್ಮ,ರಮೇಶ ಬಡಿಗೇರ ತುಮಕೂರು ಇದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";