ಮುಂಗಾರು ಹಬ್ಬ ದೇಶಕ್ಕೆ ಮಾದರಿ- ಕುಮಾರ ನಾಯಕ

Eshanya Times

ರಾಯಚೂರು, ಜೂ.22:  ಮುನ್ನೂರು ಕಾಪು ಸಮಾಜದ ಮುಂಗಾರು ಸಾಂಸ್ಕೃತಿಕ ರಾಯಚೂರು ನಾಡ ಹಬ್ಬ ಜಿಲ್ಲೆಯಲ್ಲಿ ಜನಪ್ರಿಯತೆ ಗಳಿಸುವುದರ ಮೂಲಕ ದೇಶಕ್ಕೆ ಮಾದರಿಯಾಗಿದೆ ಎಂದು ಸಂಸದ ಜಿ ಕುಮಾರ ನಾಯಕ ಅವರು ಹೇಳಿದರು.

ಅವರಿಂದು ನಗರದ ರಾಜೇಂದ್ರ ಗಂಜ್ ಆವರಣದಲ್ಲಿ ಎರಡನೇ ದಿನದ ಮುಂಗಾರು ಸಾಂಸ್ಕೃತಿಕ ರಾಯಚೂರು ನಾಡ ಹಬ್ಬದ ಭಾರದ ಕಲ್ಲು ಎಳೆಯುವ ಎತ್ತುಗಳ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ 24 ವರ್ಷಗಳ ಹಿಂದೆ ರಾಯಚೂರು ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಮುನ್ನೂರು ಕಾಪು ಸಮಾಜದಿಂದ ಆಯೋಜನೆ ಮಾಡುವ ಮುಂಗಾರು ಹಬ್ಬವನ್ನು ವೀಕ್ಷಣೆ ಮಾಡುತ್ತ ಬಂದಿದ್ದೇನೆ. ಆದರೆ ಭಾರೀ ಗಾತ್ರದ ಎತ್ತುಗಳ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವದರ ಮೂಲಕ ಮುನ್ನೂರು ಕಾಪು ಸಮಾಜ ಜಿಲ್ಲೆಯಲ್ಲಿ ಹೆಸರುವಾಸಿಯಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸಮಾಜದಿಂದ ಅಭೂತಪೂರ್ವ ಬೆಂಬಲ ದೊರೆತಿದೆ. ಸಮಾಜ ಸಂಪೂರ್ಣ ಸಹಕಾರ ನನಗೆ ತೋರಿದೆ.ಅ ನಿಟ್ಟಿನಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಕಳೆದ 24 ವರ್ಷಗಳಿಂದ ಹಬ್ಬದ ರೂವಾರಿ ಎ. ಪಾಪಾರೆಡ್ಡಿ ಅವರು ಅತ್ಯಂತ ಅದ್ದೂರಿ ಮತ್ತು ಜನಪ್ರಿಯತೆ ಗಳಿಸುವ ನಿಟ್ಟಿನಲ್ಲಿ ಹಬ್ಬವನ್ನು ಆಯೋಜನೆ ಮಾಡಿದ್ದಾರೆ. ಎತ್ತುಗಳ ಭಾರದ ಕಲ್ಲು ಎಳೆಯುವ ಸ್ಪರ್ಧೆಯೊಂದಿಗೆ ವಿವಿಧಸಾಂಸ್ಕೃತಿಕ

ತಂಡಗಳ ಪ್ರದರ್ಶನ ಮತ್ತು ಕುಸ್ತಿ ಹಾಗೂ ಇನ್ನಿತರ ಕಾರ್ಯಕ್ರಮಗಳು ಮುಂಗಾರು ಸಾಂಸ್ಕೃತಿಕ ಹಬ್ಬದ ವೈಭವ ಹೆಚ್ಚುವಂತೆ ಮಾಡಲಿವೆ. ಪ್ರಧಾನವಾಗಿ ಕೃಷಿಸಮುದಾಯವಾದ ಮುನ್ನೂರುಕಾವು ಸಮಾಜ ಕೃಷಿ ಪಾರಂಪರಿಕ ಕಾರ ಹುಣ್ಣಿಮೆಯನ್ನು ಜನಾಕರ್ಷಿಸುವ ಆಯೋಜಿಸುತ್ತಿದೆ ಎಂದರು. ಮುಂಗಾರು ಹಬ್ಬ ಭಾರಿ ಜನ ಮನ್ನಣೆ ಪಡೆದುಕೊಂಡಿದೆ ಎಂದರು. ಈ ಭಾರಿ ಮುಂಗಾರು ಹಂಗಾಮಿ ಈ ಸಲ ಉತ್ತಮವಾಗಿದ್ದು, ರೈತರು ಸಂತಸದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಮುಂಗಾರು ಉತ್ತಮ ಮಳೆಯಿಂದಾಗಿ ರೈತ ಸಮುದಾಯ ಕೃಷಿ ಚಟುವಟಿಕೆಗಳಲ್ಲಿ ತೊಡಗಿ- ಕೊಂಡಿದೆ. ಇದು ಮುಂಬರುವ ದಿನಗಳಲ್ಲಿ ಕೃಷಿ ಸಮುದಾಯಕ್ಕೆ ಶುಭ ಸಂದೇಶವಾಗಿದೆ. ಮುನ್ನೂರು ಕಾಪು ಸಮಾಜ ಪ್ರತಿ ವರ್ಷ ರಾಯಚೂರು ಸಾಂಸ್ಕೃತಿಕ ಹಬ್ಬ ಅದ್ದೂರಿಯಿಂದ ಆಚರಿಸುತ್ತದೆ. ರಾಜ್ಯದಲ್ಲಿಯೇ ಮಾದರಿ ಎನ್ನುವಂತೆ ಈ ಕಾರ್ಯಕ್ರಮ ಆಯೋಜಿಸುವುದು ಅತ್ಯಂತ ಶ್ಲಾಘನೀಯವಾಗಿದೆ.

ಹಬ್ಬದ ರೂವಾರಿಗಳು ಹಾಗೂ ಮಾಜಿ ಶಾಸಕರಾದ ಎ.ಪಾಪಾರೆಡ್ಡಿ ಅವರು ಈ ಕಾರ್ಯಕ್ರಮವನ್ನು ಕಾಣಿಸಿಕೊಂ- ಅತ್ಯುತ್ತಮವಾಗಿ ನಿರ್ವಹಿಸುವ ಮೂಲಕ ಜನಪ್ರಿಯ ತಂದುಕೊಟ್ಟಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಹಬ್ಬದ ರೂವಾರಿ ಮಾಜಿ ಶಾಸಕ ಎ. ಪಾಪಾರೆಡ್ಡಿ, ಸಮಾಜದ ಹಿರಿಯ  ಮುಖಂಡ ಬೆಲ್ಲಂ ನರಸರೆಡ್ಡಿ, ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜ್, ಜಯಣ್ಣ , ಶಾಂತಪ್ಪ, ಮುನ್ನೂರು ಕಾಪು ಸಮಾಜದ ಮುಖಂಡರು ಮತ್ತು ತೆಲಂಗಾಣದಿಂದ ಆಗಮಿಸಿದ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";