ಪ್ರಕಾಶ ಕೆ.ರಾಠೋಡರನ್ನು ವಿಧಾನಪರಿಷತ್’ಗೆ ಮುಂದುವರಿಸಿ ಸಚಿವ ಸ್ಥಾನ ನೀಡಲು ಬಂಜಾರಾ ಸಮಾಜ ಒತ್ತಾಯ

Eshanya Times

ಸಿರವಾರ,ಅ.೦೬- ಬಂಜಾರಾ ಸಮುದಾಯದ ಧೀಮಂತ ಹಿರಿಯ ಮುತ್ಸದ್ಧಿ,ರಾಜಕಾರಣಿಯಾದ ವಿಧಾನ ಪರಿಷತ್’ ಸದಸ್ಯರಾದ ಪ್ರಕಾಶ ಕೆ.ರಾಠೋಡ್’ ಅವರ ಹಾಲಿ ವಿಧಾನಪರಿಷತ್’ ಅಧಿಕಾರದ ಅವಧಿ ಶೀಘ್ರದಲ್ಲಿ ಮುಕ್ತಾಯವಾಗಲಿದ್ದು, ಅವರನ್ನು ಮತ್ತೊಂದು ಅವಧಿಗೆ ವಿಧಾನಪರಿಷತ್’ಗೆ ಮುಂದುವರಿಸಿ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು, ರಾಯಚೂರು ಜಿಲ್ಲೆಯ ಬಂಜಾರಾ ಸಮಾಜದ ಮುಖಂಡರು ರಾಜ್ಯ ಕಾಂಗ್ರೆಸ್’ ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತು ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದ ಬಂಜಾರಾ ಸಮಾಜದ ಮುಖಂಡರು, ಪ್ರಕಾಶ್’ ಕೆ.ರಾಠೋಡ್’ ಅವರು ಹಲವಾರು ರ‍್ಷಗಳಿಂದ ಕಾಂಗ್ರೆಸ್’ ಪಕ್ಷಕ್ಕೆ ಹಗಲಿರುಳು ದುಡಿದಿದ್ದು ಪಕ್ಷ ಸಂಘಟನೆಯಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್’ ಪಕ್ಷ ಅಧಿಕಾರಕ್ಕೆ ಬರಲು ಬಂಜಾರಾ ಸಮುದಾಯವನ್ನು ಪಕ್ಷದ ಸಂಘಟನೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಕಾಶ’ ಕೆ.ರಾಠೊಡ್’ ಅವರು ರಾಜ್ಯದ ಉದ್ದಗಲಕ್ಕೂ ಬಂಜಾರಾ ಸಮಾಜಕ್ಕೆ ಚಿರಪರಿಚಿತ ರಾಜಕಾರಣಿಯಾಗಿದ್ದು, ಅವರ ಪ್ರಸ್ತುತ ವಿಧಾನಪರಿಷತ್’ ಅಧಿಕಾರ ಅವಧಿಯು ಈ ತಿಂಗಳ ಕೊನೆಯಲ್ಲಿ ಮುಕ್ತಾಯವಾಗಲಿದೆ.ಟಿeಹಾಗಾಗಿ ಬಂಜಾರಾ ಸಮಾಜದ ಧೀಮಂತ ಮತ್ತು ಸರಳ ಸಜ್ಜನಿಕೆ ರಾಜಕಾರಣಿಯಾದ ಪ್ರಕಾಶ’ ಕೆ.ರಾಠೋಡ್’ ಅವರನ್ನು ಮತ್ತೊಂದು ಅವಧಿಗೆ ವಿಧಾನಪರಿಷತ್’ ಸದಸ್ಯರಾಗಿ ಮುಂದುವರಿಸಬೇಕು ಮತ್ತು ಸಚಿವ ಸಂಪುಟದಲ್ಲಿ ಸಚಿವ ಸ್ಥಾನವನ್ನು ನೀಡಲು ಮುಖ್ಯಮಂತ್ರಿಗಳು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂರ‍್ಭದಲ್ಲಿ ಬಂಜಾರಾ ಸಮಾಜದ ಜಿಲ್ಲಾ ಮುಖಂಡರಾದ ಕೃಷ್ಣಪ್ಪ ಪವಾರ್’, ಗೋವಿಂದರಾಜ್’ ನಾಯ್ಕ್, ನಾರಾಯಣ ನಾಯ್ಕ್, ಜುವಲೆಪ್ಪ ನಾಯ್ಕ್, ನಾಗರೆಡ್ಡಿ ಕೆ.ಬಿ, ಲಚ್ಚಪ್ಪ ನಾಯ್ಕ್, ಪಾಂಡು ನಾಯ್ಕ್, ವೆಂಕಟೇಶ್ ಪವಾರ್, ಶಿವು ಚೌಹಾಣ್, ಅನೀಲ್ ರಾಠೋಡ್ ಸೇರಿದಂತೆ ಅನೇಕರು ಇದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";