ನ್ಯಾಯಾಲಯ ಸಂಕರ‍್ಣದ ಅಭಿವೃದ್ಧಿಗಾಗಿ ಶಾಸಕರಿಗೆ ಮನವಿ

Eshanya Times

ಲಿಂಗಸುಗೂರು : ನೂತನವಾಗಿ ನರ‍್ಮಾಣವಾಗುತ್ತಿರುವ ನ್ಯಾಯಾಲಯದ ಸಂಕರ‍್ಣದ ಅಭಿವೃದ್ಧಿಗಾಗಿ ಕಲ್ಯಾಣ ರ‍್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಅನುದಾನ ಮಂಜೂರು ಮಾಡಬೇಕೆಂದು ಒತ್ತಾಯಿಸಿ ವಕೀಲರ ಸಂಘದ ಅಧ್ಯಕ್ಷ ಭೂಪನಗೌಡ.ವಿ. ಪಾಟೀಲ್ ನೇತೃತ್ವದಲ್ಲಿ ಶಾಸಕ ಮಾನಪ್ಪ ವಜ್ಜಲ್‌ರಿಗೆ ಮನವಿ ಮಾಡಿದರು.

ಪಟ್ಟಣದಲ್ಲಿ ನೂತನ ನ್ಯಾಯಾಲಯ ಸಂಕರ‍್ಣದಲ್ಲಿ ನಾಲ್ಕು ಕಡೆ ಹೈಮಾಸ್ ದೀಪ, ಉತ್ತಮವಾದ ಉದ್ಯಾನವನ, ನ್ಯಾಯಾಧೀಶರಿಗೆ ಹಾಗೂ ನ್ಯಾಯವಾದಿಗಳ ದೈಹಿಕ ಚಟುವಟಿಕೆಗಾಗಿ ಲಾಂಗ್ ಟೆನ್ನಿಸ್ ಮೈದಾನ, ನ್ಯಾಯವಾದಿಗಳ ಸಂಘದ ಕಟ್ಟಡದೊಳಗೆ ಉತ್ತಮವಾದ ಪಿಠೋಪಕರಣಗಳ ಅಳವಡಿಕೆ ಹಾಗೂ ಸಭಾ ವೇದಿಕೆ ನರ‍್ಮಾಣ ಮಾಡಲು ಕಲ್ಯಾಣ ಕಲ್ಯಾಣ ರ‍್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಅನುದಾನ ಹಾಗೂ ಶಾಸಕರ ಅನುದಾನದಡಿಯಲ್ಲಿ ಕೋರಿಕೆಯ ಬಸ್ ನಿಲ್ದಾಣ ನರ‍್ಮಿಸಲು ಅನುದಾನ ಮಂಜೂರು ಮಾಡಬೇಕು ಹಾಗೂ ಈ ಎಲ್ಲಾ ಸೌಲಭ್ಯಗಳ ತಗಲುವ ವೆಚ್ಚವನ್ನು ಅಂದಾಜಿಸಿ ಅನುದಾನವನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.

ಈ ಸಂರ‍್ಭದಲ್ಲಿ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಬಸವಲಿಂಗಯ್ಯ ವಸ್ತ್ರದ, ಕರ‍್ಯರ‍್ಶಿ ಬಾಲರಾಜ ಸಾಗರ, ದೇವಣ್ಣ, ನಾಗರಾಜ ಗಸ್ತಿ, ರವಿಕುಮಾರ್ ಕಬ್ಬೇರ್, ರಾಜೇಶಕುಮಾರ್, ಅರುಣಕುಮಾರ್ ಮುಖಂಡರಾದ ಗಿರಿಮಲ್ಲನಗೌಡ ಪಾಟೀಲ್, ನಾಗಭೂಷಣ, ಲೋಕಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಲಕ್ಷ್ಮಿಕಾಂತ್ ಗುಂಟಿ ಸೇರಿ ಇತರರು ಇದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";