ಸಿಡಿಲು ಬಡಿದು ಮೃತಪಟ್ಟ ಕುಟುಂಬಕ್ಕೆ ಶಾಸಕರಿಂದ 5 ಲಕ್ಷ ಚೆಕ್ ವಿತರಣೆ

Eshanya Times

ದೇವದುರ್ಗ : ತಾಲೂಕಿನ ಪಲಕನಮರಡಿ ಗ್ರಾಮ ಪಂಚಾಯತ್ ವ್ಯಾಪ್ತಿ ಮೂಡಲಗುಂಡ ಗ್ರಾಮದಲ್ಲಿ ಶುಕ್ರವಾರ ಸಂಜೆ ಸಿಡಿಲು ಬಡಿದು ಬಸವರಾಜ ಶಿವಪ್ಪ(30 ವರ್ಷ)ಮೃತಪಟ್ಟ ಘಟನೆ ಜರುಗಿದೆ.
ಶಾಸಕಿ ಭೇಟಿ : ಸಿಡಿಲು ಬಡಿದು ಮೃತಪಟ್ಟ ಬಸವರಾಜ ಶಿವಪ್ಪ ಕುಟುಂಬಕ್ಕೆ ಶನಿವಾರ ಕ್ಷೇತ್ರದ ಶಾಸಕಿ ಕರೆಮ್ಮ ಗೋಪಾಲಕೃಷ್ಣ ನಾಯಕ ಭೇಟಿ ನೀಡಿ ತಕ್ಷಣವೇ ಸರ್ಕಾರದಿಂದ ಬರುವ ಪರಿಹಾರ ಧನವನ್ನು ವಿಳಂಬ ಮಾಡದೇ ಸ್ಥಳದಲ್ಲಿಯೇ ಪರಿಹಾರ ನೀಡಲು ಸೂಚಿಸಿರುವ ಪ್ರಯುಕ್ತ ತಕ್ಷಣವೇ ತಹಶೀಲ್ದಾರ ಚನ್ನಮಲ್ಲಪ್ಪ ಘಂಟಿ 5 ಲಕ್ಷ ರೂಪಾಯಿ ಚೆಕ್‌ನ್ನು ಶಾಸಕರ ಮುಖಾಂತರ ನೀಡಿದರು.
ನಂತರ ಮಾತನಾಡಿದ ಶಾಸಕಿ ಕರೆಮ್ಮ ನಾಯಕ ಮುಂದಿನ ದಿನಗಳಲ್ಲಿ ಮೃತನ ಕುಟುಂಬಕ್ಕೆ ಹೆಚ್ಚಿನ ಪರಿಹಾರವನ್ನು ಸರ್ಕಾರದ ಮೂಲಕ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಚನ್ನಮಲ್ಲಪ್ಪ ಘಂಟಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹಟ್ಟಿ, ಕಂದಾಯ ನಿರೀಕ್ಷಕ ದೇವರೆಡ್ಡಿ, ಮುಖಂಡ ಸಿದ್ದನಗೌಡ ಪಾಟೀಲ್, ರಾಮಣ್ಣ ನಾಯಕ, ರೇಣುಕಾಸ್ವಾಮಿ, ಲಕ್ಷ್ಮಣ ಊಟಿ, ಬಾಲಯ್ಯ ಇದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";